ಕುಕ್ಕುಂದೂರು ವ್ಯಾಪ್ತಿಯಲ್ಲಿ ಆಹಾರ ಸಾಮಾಗ್ರಿ ವಿತರಣೆ;ಪೂರ್ಣಿಮಾ ಸಿಲ್ಕ್ಸ್ ಹಾಗೂ ಇತರ ದಾನಿಗಳ ನೆರವಿನಿಂದ 150ಕ್ಕೂ ಹೆಚ್ಚಿನ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ-
ಕುಕ್ಕುಂದೂರಿನ ಪೂರ್ಣಿಮಾ ಸಿಲ್ಕ್ಸ್ ಹಾಗೂ ಇತರ ದಾನಿಗಳ ನೆರವಿನಿಂದ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿನಸಿ ವಸ್ತುಗಳನ್ನು ಮಾಲಕರಾದ ರವಿಪ್ರಕಾಶ್ ಕೆ.ಪ್ರಭು ವಿತರಿಸಿದರು. ಕುಕ್ಕುಂದೂರು ಗ್ರಾಮಪಂಚಾಯತ್ ವ್ಯಾಪ್ತಿಯ ಎಪಿಎಲ್ ಹಾಗೂ ಬಿಪಿಲ್ ರಹಿತ ಅರ್ಹ ಸುಮಾರು 150 ಕುಟುಂಬಗಳಿಗೆ ದಿನಸಿಪದಾರ್ಥಗಳನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ರಮೇಶ್, ಪಿಡಿಓಮಾಧವರಾವ್, ಉಪಾಧ್ಯಕ್ಷ ರಾಜೇಶ್ ರಾವ್ ಹಾಗೂ ಪಂಚಾಯತ್ ಸದಸ್ಯರಾದ ಕರುಣಾಕರ್ ಪೂಜಾರಿ,ರವೀಂದ್ರ ಶೆಟ್ಟಿ, ಮತ್ತು ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Post a comment