ಪೊರ್ತು ಚಾರಿಟೇಬಲ್ ಟ್ರಸ್ಟ್ ತುರ್ತು ಸೇವಾಯೋಜನೆ ಕ್ರಮಾಂಕ 4 - ಫಲಾನುಭವಿ - ಭಾಸ್ಕರ್ ಪರಿವಾರ
ಕ್ಯಾನ್ಸರ್ ನಿಂದ ಹಾಸಿಗೆ ಹಿಡಿದ ಮನೆಯ ಯಜಮಾನ, ದಯನೀಯವಾಗಿದೆ ಮನೆಯವರ ಬದುಕು, ಆಸರೆಯಾಗಬೇಕಿದೆ ದಾನಿಗಳು.. ..
28.06.2020
ಜೀವನೋಪಾಯಕ್ಕಾಗಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಕಾರ್ಕಳ ತಾಲೂಕು, ಮುನಿಯಾಲಿನ ಭಾಸ್ಕರ್ ಅವರು, ತನ್ನ ಪತ್ನಿ, ಮಗು, ಅಮ್ಮ , ಅಕ್ಕ ಮತ್ತು ಅಕ್ಕನ ಮೂವರು ಮಕ್ಕಳು, ಅವರ ವಿದ್ಯಾಭ್ಯಾಸ, ಅಕ್ಕನ ಹಿರಿಯ ಮಗಳು 23 ವರ್ಷಗಳಿಂದ ಹುಟ್ಟು ಬುದ್ದಿ ಮಾಂದ್ಯೆ. ಹೀಗೆ ಎಲ್ಲರ ಜವಾಬ್ದಾರಿ ಹೊತ್ತು ಬಂದ ಆದಾಯದಲ್ಲಿ ಎಲ್ಲವನ್ನೂ ಸರಿದೂಗಿಸುತ್ತಾ ನೆಮ್ಮದಿಯಾಗಿದ್ದವರು. ಮನೆಯ ಎಲ್ಲಾ ಖರ್ಚು ವೆಚ್ಚಗಳಿಗೂ ಭಾಸ್ಕರ್ ಅವರನ್ನೇ ಅವಲಂಭಿಸಿತ್ತು ಈ ಪರಿವಾರ.
ಎರಡುವರೆ ವರ್ಷದ ಹಿಂದೆ ಬಾಯಿಯ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಆಯುಷ್ಮಾನ್ ಆರೋಗ್ಯ ವಿಮೆಯ ಮೂಲಕ 8 ಕೆಮಿಯೋಥೆರಪಿ ನಡೆಸಿ, ಸ್ವಲ್ಪ ಚೇತರಿಸಿಕೊಂಡಿದ್ದ ಬಾಸ್ಕರ್ ಅವರಿಗೆ ಮತ್ತೆ ಬಾಯಲ್ಲಿ ಈ ಹಿಂದೆ ಚಿಕಿತ್ಸೆ ಕೊಡಿಸಿದ ಜಾಗದಲ್ಲೆ ಮತ್ತೆ ಹುಣ್ಣು ಆಗ ತೊಡಗಿತು ಹುಣ್ಣು ಗೆಡ್ಡೆ ರೂಪದಲ್ಲಿ ಮಾಂಸದ ತುಂಡಿನಂತೆ ಬಾಯಿಯಲ್ಲಿ ಕಾಣತೊಡಗಿತ್ತು. ಮತ್ತೆ ವೈದ್ಯರ ಬಳಿ ತೆರಳಿದಾಗ ಇದಕ್ಕೆ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕು ಎಂದು ತಿಳಿಸಿದಾಗ, ಹೆಲ್ತ್ ಕಾರ್ಡ್ ನ ಮಿತಿ ಈಗಾಗಲೇ ಮುಗಿದಿದ್ದು, ಹೇಗೊ ದಾನಿಗಳ ನೆರವು, ಮನೆಯ ಮೇಲೆ ಸಾಲ, ಗೆಳೆಯರ ಸಹಾಯದಿಂದ ಅವರ ಶಸ್ತ್ರಚಿಕಿತ್ಸೆ ಹತ್ತು ತಿಂಗಳ ಹಿಂದೆ ಮಾಡಿಸಿದ್ದು ,ಶಸ್ತ್ರಚಿಕಿತ್ಸೆ ನಂತರ ಸುಮಾರು ನಾಲ್ಕು ರೆಡಿಯೇಷನ್ ಮಾಡಿಸಿದರೂ ನೋವು ಇನ್ನೂ ಹಾಗೆ ಇದ್ದು ಗಂಜಿಯನ್ನು ಕಡೆದು ಕುಡಿಸುತ್ತಿದ್ದಾರೆ ಮನೆಯವರು..
ಸದ್ಯಕ್ಕೆ ಮನೆಯ ಎಲ್ಲಾ ಖರ್ಚು ವೆಚ್ಚ ಇವರ ಅಕ್ಕ ಬೀಡಿ ಕಟ್ಟಿ ತರುವ ಆದಾಯದಿಂದ ಆಗಬೇಕಿದ್ದು ಇವರ ಹೆಂಡತಿಗೆ ಇವರನ್ನು ನೋಡಿಕೊಳ್ಳಲು, ಮನೆ ಕೆಲಸ ಮಾಡುವ ಸ್ಥಿತಿಯಲ್ಲಿ ಎಲ್ಲೂ ಕೆಲಸಕ್ಕೂ ಹೋಗಲಾಗುತ್ತಿಲ್ಲ ಮತ್ತು ಇವರಿಗೆ ಒಂದು ಚಿಕ್ಕ ಮಗು ಕೂಡ ಇದೆ. ಭಾಸ್ಕರ್ ಅವರ ಅಕ್ಕನ 3 ಮಕ್ಕಳಲ್ಲಿ, ಒಬ್ಬ S.S.L.C .ಓದುತಿದ್ದು ಉತ್ತಮ ಕ್ರೀಡಾಪಟು. ಇನ್ನೊಬ್ಬ ಮಗ ಪ್ರಥಮ ವರ್ಷದ P.U.C. ಕಲಿಯುತಿದ್ದಾನೆ. 23 ವರ್ಷದ ಹಿರಿಯ ಮಗಳು ಬುದ್ದಿಮಾಂದ್ಯೆ,ಇವಳ ಚಿಕಿತ್ಸೆಗೂ ಸುಮಾರು ಖರ್ಚು ಮಾಡಿದ್ದು ಯಾವುದೆ ಉಪಯೋಗ ಆಗಲಿಲ್ಲ. ಹೀಗೆ ಕಷ್ಟಗಳ ಸುಳಿಗೆ ಸಿಕ್ಕಿ, ಮನೆಯಲ್ಲಿ ದುಡಿದು ಸಂಪಾದಿಸುತಿದ್ದ ಯಜಮಾನ ಕಾಯಿಲೆಯಿಂದ ಹಾಸಿಗೆ ಹಿಡಿದು, ಆತನ ಚಿಕಿತ್ಸೆಗೆ, ಸಾಲ, ಸೋಲ ಮಾಡಿಯೂ ಗುಣಮುಖನಾಗದೆ, ದಿಕ್ಕು ತೋಚದೆ, ಜೀವನ ನಿರ್ವಹಣೆಗೆ ದಾರಿ ಕಾಣದೆ ಪರದಾಡುತ್ತಿರುವ ಕುಟುಂಬದ ಅಸಹಾಯಕ ಸ್ಥಿತಿ ಪರಿಗಣಿಸಿ, ಈ ಕುಟುಂಬಕ್ಕೆ ನೆರವಾಗಲು, ಪೊರ್ತು ಚಾರಿಟೇಬಲ್ ಟ್ರಸ್ಟ್ (ರಿ) ರೂ. 30,000 ದ ಧನಸಂಗ್ರಹದ ಗುರಿಯೊಂದಿಗೆ, ತನ್ನ ತುರ್ತು ಯೋಜನೆಯ ಫಲಾನುಭವಿಯನ್ನಾಗಿ ಭಾಸ್ಕರ್ ಅವರ ಕುಟುಂಬವನ್ನು ಆರಿಸಿದೆ. ತಮ್ಮ ಭವಿಷ್ಯದ ದಾರಿ ಕಾಣದೆ ಅಂಧಕಾರದಲ್ಲಿ ಮುಳುಗಿರುವ ಈ ಪರಿವಾರಕ್ಕೆ ಭವಿಷ್ಯದ ಬೆಳಕು ತೋರಿಸುವ ಪುಟ್ಟ ಪ್ರಯತ್ನ ಮಾಡೋಣ. ಬನ್ನಿ ತಮ್ಮ ಕೈಲಾದ ಮೊತ್ತ ಕೆಳಗೆ ನೀಡಿರುವ ಲಿಂಕ್ ಮೂಲಕ ಧನಸಹಾಯ ಮಾಡಿ, ಮಾನವೀಯತೆ ಮೆರೆಯೋಣ.
http://ket.to/Porthucharitabletrust-emergency-fundraising
ಧನ್ಯವಾದಗಳು,
ಪೊರ್ತು ಆಡಳಿತ ಮಂಡಳಿ
Times Of karkala whatsapp Group link:
ಕ್ಯಾನ್ಸರ್ ನಿಂದ ಹಾಸಿಗೆ ಹಿಡಿದ ಮನೆಯ ಯಜಮಾನ, ದಯನೀಯವಾಗಿದೆ ಮನೆಯವರ ಬದುಕು, ಆಸರೆಯಾಗಬೇಕಿದೆ ದಾನಿಗಳು.. ..
28.06.2020
ಜೀವನೋಪಾಯಕ್ಕಾಗಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಕಾರ್ಕಳ ತಾಲೂಕು, ಮುನಿಯಾಲಿನ ಭಾಸ್ಕರ್ ಅವರು, ತನ್ನ ಪತ್ನಿ, ಮಗು, ಅಮ್ಮ , ಅಕ್ಕ ಮತ್ತು ಅಕ್ಕನ ಮೂವರು ಮಕ್ಕಳು, ಅವರ ವಿದ್ಯಾಭ್ಯಾಸ, ಅಕ್ಕನ ಹಿರಿಯ ಮಗಳು 23 ವರ್ಷಗಳಿಂದ ಹುಟ್ಟು ಬುದ್ದಿ ಮಾಂದ್ಯೆ. ಹೀಗೆ ಎಲ್ಲರ ಜವಾಬ್ದಾರಿ ಹೊತ್ತು ಬಂದ ಆದಾಯದಲ್ಲಿ ಎಲ್ಲವನ್ನೂ ಸರಿದೂಗಿಸುತ್ತಾ ನೆಮ್ಮದಿಯಾಗಿದ್ದವರು. ಮನೆಯ ಎಲ್ಲಾ ಖರ್ಚು ವೆಚ್ಚಗಳಿಗೂ ಭಾಸ್ಕರ್ ಅವರನ್ನೇ ಅವಲಂಭಿಸಿತ್ತು ಈ ಪರಿವಾರ.
ಎರಡುವರೆ ವರ್ಷದ ಹಿಂದೆ ಬಾಯಿಯ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಆಯುಷ್ಮಾನ್ ಆರೋಗ್ಯ ವಿಮೆಯ ಮೂಲಕ 8 ಕೆಮಿಯೋಥೆರಪಿ ನಡೆಸಿ, ಸ್ವಲ್ಪ ಚೇತರಿಸಿಕೊಂಡಿದ್ದ ಬಾಸ್ಕರ್ ಅವರಿಗೆ ಮತ್ತೆ ಬಾಯಲ್ಲಿ ಈ ಹಿಂದೆ ಚಿಕಿತ್ಸೆ ಕೊಡಿಸಿದ ಜಾಗದಲ್ಲೆ ಮತ್ತೆ ಹುಣ್ಣು ಆಗ ತೊಡಗಿತು ಹುಣ್ಣು ಗೆಡ್ಡೆ ರೂಪದಲ್ಲಿ ಮಾಂಸದ ತುಂಡಿನಂತೆ ಬಾಯಿಯಲ್ಲಿ ಕಾಣತೊಡಗಿತ್ತು. ಮತ್ತೆ ವೈದ್ಯರ ಬಳಿ ತೆರಳಿದಾಗ ಇದಕ್ಕೆ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕು ಎಂದು ತಿಳಿಸಿದಾಗ, ಹೆಲ್ತ್ ಕಾರ್ಡ್ ನ ಮಿತಿ ಈಗಾಗಲೇ ಮುಗಿದಿದ್ದು, ಹೇಗೊ ದಾನಿಗಳ ನೆರವು, ಮನೆಯ ಮೇಲೆ ಸಾಲ, ಗೆಳೆಯರ ಸಹಾಯದಿಂದ ಅವರ ಶಸ್ತ್ರಚಿಕಿತ್ಸೆ ಹತ್ತು ತಿಂಗಳ ಹಿಂದೆ ಮಾಡಿಸಿದ್ದು ,ಶಸ್ತ್ರಚಿಕಿತ್ಸೆ ನಂತರ ಸುಮಾರು ನಾಲ್ಕು ರೆಡಿಯೇಷನ್ ಮಾಡಿಸಿದರೂ ನೋವು ಇನ್ನೂ ಹಾಗೆ ಇದ್ದು ಗಂಜಿಯನ್ನು ಕಡೆದು ಕುಡಿಸುತ್ತಿದ್ದಾರೆ ಮನೆಯವರು..
ಸದ್ಯಕ್ಕೆ ಮನೆಯ ಎಲ್ಲಾ ಖರ್ಚು ವೆಚ್ಚ ಇವರ ಅಕ್ಕ ಬೀಡಿ ಕಟ್ಟಿ ತರುವ ಆದಾಯದಿಂದ ಆಗಬೇಕಿದ್ದು ಇವರ ಹೆಂಡತಿಗೆ ಇವರನ್ನು ನೋಡಿಕೊಳ್ಳಲು, ಮನೆ ಕೆಲಸ ಮಾಡುವ ಸ್ಥಿತಿಯಲ್ಲಿ ಎಲ್ಲೂ ಕೆಲಸಕ್ಕೂ ಹೋಗಲಾಗುತ್ತಿಲ್ಲ ಮತ್ತು ಇವರಿಗೆ ಒಂದು ಚಿಕ್ಕ ಮಗು ಕೂಡ ಇದೆ. ಭಾಸ್ಕರ್ ಅವರ ಅಕ್ಕನ 3 ಮಕ್ಕಳಲ್ಲಿ, ಒಬ್ಬ S.S.L.C .ಓದುತಿದ್ದು ಉತ್ತಮ ಕ್ರೀಡಾಪಟು. ಇನ್ನೊಬ್ಬ ಮಗ ಪ್ರಥಮ ವರ್ಷದ P.U.C. ಕಲಿಯುತಿದ್ದಾನೆ. 23 ವರ್ಷದ ಹಿರಿಯ ಮಗಳು ಬುದ್ದಿಮಾಂದ್ಯೆ,ಇವಳ ಚಿಕಿತ್ಸೆಗೂ ಸುಮಾರು ಖರ್ಚು ಮಾಡಿದ್ದು ಯಾವುದೆ ಉಪಯೋಗ ಆಗಲಿಲ್ಲ. ಹೀಗೆ ಕಷ್ಟಗಳ ಸುಳಿಗೆ ಸಿಕ್ಕಿ, ಮನೆಯಲ್ಲಿ ದುಡಿದು ಸಂಪಾದಿಸುತಿದ್ದ ಯಜಮಾನ ಕಾಯಿಲೆಯಿಂದ ಹಾಸಿಗೆ ಹಿಡಿದು, ಆತನ ಚಿಕಿತ್ಸೆಗೆ, ಸಾಲ, ಸೋಲ ಮಾಡಿಯೂ ಗುಣಮುಖನಾಗದೆ, ದಿಕ್ಕು ತೋಚದೆ, ಜೀವನ ನಿರ್ವಹಣೆಗೆ ದಾರಿ ಕಾಣದೆ ಪರದಾಡುತ್ತಿರುವ ಕುಟುಂಬದ ಅಸಹಾಯಕ ಸ್ಥಿತಿ ಪರಿಗಣಿಸಿ, ಈ ಕುಟುಂಬಕ್ಕೆ ನೆರವಾಗಲು, ಪೊರ್ತು ಚಾರಿಟೇಬಲ್ ಟ್ರಸ್ಟ್ (ರಿ) ರೂ. 30,000 ದ ಧನಸಂಗ್ರಹದ ಗುರಿಯೊಂದಿಗೆ, ತನ್ನ ತುರ್ತು ಯೋಜನೆಯ ಫಲಾನುಭವಿಯನ್ನಾಗಿ ಭಾಸ್ಕರ್ ಅವರ ಕುಟುಂಬವನ್ನು ಆರಿಸಿದೆ. ತಮ್ಮ ಭವಿಷ್ಯದ ದಾರಿ ಕಾಣದೆ ಅಂಧಕಾರದಲ್ಲಿ ಮುಳುಗಿರುವ ಈ ಪರಿವಾರಕ್ಕೆ ಭವಿಷ್ಯದ ಬೆಳಕು ತೋರಿಸುವ ಪುಟ್ಟ ಪ್ರಯತ್ನ ಮಾಡೋಣ. ಬನ್ನಿ ತಮ್ಮ ಕೈಲಾದ ಮೊತ್ತ ಕೆಳಗೆ ನೀಡಿರುವ ಲಿಂಕ್ ಮೂಲಕ ಧನಸಹಾಯ ಮಾಡಿ, ಮಾನವೀಯತೆ ಮೆರೆಯೋಣ.
http://ket.to/Porthucharitabletrust-emergency-fundraising
ಧನ್ಯವಾದಗಳು,
ಪೊರ್ತು ಆಡಳಿತ ಮಂಡಳಿ
Times Of karkala whatsapp Group link:
Post a comment