"ಕಾಂಗ್ರೆಸ್ ಪಕ್ಷ ರೈತರಿಗೆ ಕೊಟ್ಟಷ್ಟು ಸವಲತ್ತು ಯಾವ ಸರಕಾರವೂ ಕೊಟ್ಟಿಲ್ಲ" -ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ ಮಡಿವಾಳ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ ಮಡಿವಾಳ ಮಾತನಾಡಿ ಕಾಂಗ್ರೆಸಿನ ವಿವಿಧ ಘಟಕಗಳು ಬಲಿಷ್ಠವಾದರೆ ಕಾಂಗ್ರೆಸ್ ಬಲಿಷ್ಠವಾದ ಹಾಗೆ. ಕಾಂಗ್ರೆಸ್ ಪಕ್ಷ ಕೊಟ್ಟ ಸವಲತ್ತು ಯಾವ ಸರಕಾರವೂ ಕೃಷಿಕರಿಗೆ ಕೊಟ್ಟಿಲ್ಲ.
ದೇಶದಲ್ಲಿ ಹಸಿರು ಕ್ರಾಂತಿ ಕ್ಷೀರಕ್ರಾಂತಿ ಭೂಮಸೂದೆ ಅಕ್ರಮ-ಸಕ್ರಮ ಮೊದಲಾದ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕೃಷಿಕರನ್ನು ಸ್ವಾವಲಂಬಿಗಳಾಗಿ ಸಿ ಸ್ವಾಭಿಮಾನದ ಬದುಕನ್ನು ಕೃಷಿಕರಿಗೆ ಕೊಟ್ಟಿದೆ ಹಾಗೂ ಮನಮೋಹನ್ ಸಿಂಗ್ ನೇತೃತ್ವದ ಸರಕಾರ
72 ಸಾವಿರ ಕೋಟಿ ಸಾಲ ಮನ್ನಾ ಹಾಗೂ ಸಿದ್ದರಾಮಯ್ಯ ಸರಕಾರದ 800 ಕೋಟಿ ಸಾಲ ಮನ್ನಾ ಮಾಡಿದ ಹಾಗೆ ಈಗಿನ ಬಿಜೆಪಿ ಸರಕಾರಗಳಿಗೆ ಇಂತ ಯೋಗ್ಯತೆ ಇದೆಯೇ ಎಂದು ಪ್ರಶ್ನಿಸಿದರು.
ಜಿಲ್ಲಾ ಕಿಸಾನ್ ಸಮಿತಿಯ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿ ಇಲಾಖೆ,ತೋಟಗಾರಿಕೆ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮುಂತಾದವುಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿದರು. ಕಿಸಾನ್ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿ ಉದಯ ವಿ ಶೆಟ್ಟಿ ಮುಂದಿನ ದಿನಗಳಲ್ಲಿ ಸರ್ವರ ಸಹಕಾರವನ್ನು ಕೋರಿದರು. ನಂತರ ಬ್ಲಾಗ್ ಕಿಸಾನ್ ಸಮಿತಿಗೆ ನೇಮಕಗೊಂಡ ಹಾಗೂ ಬೂತ್ ಸಮಿತಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಸಭೆಯಲ್ಲಿ ರಾಜ್ಯ ಸಮಿತಿಯ ಸದಸ್ಯರಾದ ಉದಯ ಹೇರೂರು, ರೊಯ್ಸ್ ಫೆರ್ನಾಂಡಿಸ್, ಬ್ರಹ್ಮಾವರ ಕಿಸಾನ್ ಘಟಕದ ಅಧ್ಯಕ್ಷರಾದ ಕೀಳಂಜೆ ಹರೀಶ್ ಶೆಟ್ಟಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಶೇರಿಗಾರ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಸದಾಶಿವ ದೇವಾಡಿಗ, ಜಾರ್ಜ್ ಕ್ಯಾಸ್ಟಲಿನೋ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಧುರಾಜ್ ಶೆಟ್ಟಿ, ಎ.ಪಿ.ಎಂ.ಸಿ ಸದಸ್ಯರಾದ ಜಯರಾಮ ಆಚಾರ್ಯ, ಐ.ಟಿ ಸೆಲ್ ಅಧ್ಯಕ್ಷರಾದ ಸತೀಶ್ ಕಾರ್ಕಳ ಹಾಗೂ ಕ್ರಷ್ಣ ಹೆಗ್ಡೆ ಉಪಸ್ಥಿತರಿದ್ದರು ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಧನ್ಯವಾದವಿತ್ತರು ಕಾರ್ಕಳ ಸೇವಾದಳದ ಅಧ್ಯಕ್ಷ ಸುಶಾಂತ್ ಸುಧಾಕರ್ ಕಾರ್ಯಕ್ರಮ ನಿರ್ವಹಿಸಿದರು.
Times Of karkala whatsapp Group link:
ಜಾಹೀರಾತು
Post a comment