ಪಳ್ಳಿ:ಟಿಪ್ಪರ್ ಪಲ್ಟಿ:ಬಸ್ ಸಂಚಾರವಿಲ್ಲದೆ ಟಿಪ್ಪರ್ ಚಾಲಕನಾಗಿ ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿದ್ದ ವ್ಯಕ್ತಿಯ ದುರಂತ ಸಾವು-Times of karkala
ಕಾರ್ಕಳ,ಆ.08:ತಾಲೂಕಿನ ಪಳ್ಳಿ-ನಿಂಜೂರು ಬಳಿ ಟಿಪ್ಪರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ......
ಕಾರ್ಕಳ,ಆ.08:ತಾಲೂಕಿನ ಪಳ್ಳಿ-ನಿಂಜೂರು ಬಳಿ ಟಿಪ್ಪರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ನೀರಿನ ಹೊಂಡಕ್ಕೆ ಟಿಪ್ಪರ್ ಪಲ್ಟಿಯಾಗಿದ್ದು ಟಿಪ್ಪರ್ ನಲ್ಲಿದ್ದ ಚಾಲಕ ಗಣಿತ ನಗರದ ನಿವಾಸಿ ಅರುಣ್ ಕುಮಾರ್ ಹಾಗೂ ಇನ್ನೋರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅಶೋಕ್ ಬಸ್ ನ ಚಾಲಕರಾಗಿದ್ದ ಅರುಣ್ ಕುಮಾರ್ ಸದ್ಯ ಯಾವುದೇ ಕೆಲಸವಿಲ್ಲದೇ ಟಿಪ್ಪರ್ ನಲ್ಲಿ ಚಾಲಕರಾಗಿ ಕೆಲಸಕ್ಕೆ ಸೇರಿದ್ದರು.ಹೊಂಡದಲ್ಲಿ ಭಾರೀ ನೀರಿದ್ದ ಪರಿಣಾಮ ಹೊರಬರಲಾಗದೆ ಅಲ್ಲಿಯೇ ಅಸುನೀಗಿದ್ದಾರೆ.
Post a comment