ಹೆಬ್ರಿ,ಸೆ.06:ನಿರಂತರ ಸಮಜಮುಖಿ ಕೆಲಸಗಳಿಂದ ಜನಮನ್ನಣೆ ಗಳಿಸುತ್ತಿರುವ ಶಾಂತಿನಿಕೇತನ ಯುವ ವೃಂದ ಕುಡಿಬೈಲು ಕುಚ್ಚೂರು ಮತ್ತು ಚಾಣಕ್ಯ ಎಜುಕೇಶನ್ ಅಕಾಡೆಮಿ ಹೆಬ್ರಿ ಇವರ ಜಂಟಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಾಣಕ್ಯ ಅಕಾಡೆಮಿಯ ಶ್ರೀ ಉದಯಕುಮಾರ್ ಶೆಟ್ಟಿ ಅವರು ಚಾಣಕ್ಯ ಅಕಾಡೆಮಿ ಮತ್ತು ಶಾಂತಿನಿಕೇತನ ಯುವ ವೃಂದ ವಿಶಿಷ್ಟ ಆಲೋಚನೆಗಳ ಮೂಲಕ ವಿಶಿಷ್ಟ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದನ್ನು ಶ್ಲಾಘಿಸಿದರು.ಶಾಂತಿನಿಕೇತನದ ಅಧ್ಯಕ್ಷರಾದ ರಾಜೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು
ಬಹುಮಾನ ವಿತರಣೆ:
ಇದೆ ಸಂದರ್ಭದಲ್ಲಿ ನನ್ನ ನೆಚ್ಚಿನ ಶಿಕ್ಷಕ ನ ಬಗ್ಗೆ ಲೇಖನ ವಿಜೇತರಿಗೆ ಬಹುಮಾನ ನೀಡಲಾಯಿತು.
ಸೀನಿಯರ್ ಭಾಗದಲ್ಲಿ ರೇಷ್ಮಾ ಕಡ್ತಲದ ಪ್ರಥಮ , ರಶ್ಮಿ ತುಮಕೂರು ದ್ವಿತೀಯ ಬಹುಮಾನ ಹಾಗೂ ಮಕ್ಕಳ ವಿಭಾಗದಲ್ಲಿ ಸೌಜನ್ಯ ಪ್ರಥಮ, ಚೇತನ್ ದ್ವಿತೀಯ ಬಹುಮಾನ ಪಡೆದರು... ಭಾಗವಹಿಸಿದ ಎಲ್ಲರಿಗೂ ಸಮಾಧನಕರ ಬಹುಮಾನ ನೀಡಲಾಯಿತು.
ಸಂಘದ ಸದಸ್ಯರಾದ ವಿಷ್ಣುದರಣ್ ಸ್ವಾಗತಿಸಿ, ನರೇಂದ್ರ ವಂದಿಸಿದರು.
Post a comment