ಕಾರ್ಕಳ ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಬುಡಕಟ್ಟು ಸಮುದಾಯದ ನಾಯಕ ಭಗವಾನ್ ಬಿರ್ಸಾ ಮುಂಡಾ 145 ನೇ ಜನ್ಮಜಯಂತಿ ನವೆಂಬರ್ 22ರಂದು ವಿಕಾಸ ಶಾಸಕರ ಕಚೇರಿಯಲ್ಲಿ ಆಚರಣೆ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುಲ್ಬರ್ಗ ಸಂಸದರಾದ ಡಾಕ್ಟರ್ ಉಮೇಶ್ ಜಾಧವ್ ಅವರು ಮಾತನಾಡಿ, ಬಿರ್ಸಾ ಮುಂಡಾ ಅತ್ಯಂತ ಪರಿಣಾಮಕಾರಿಯಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿದ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಡುವಲ್ಲಿ ಅಗ್ರಗಣ್ಯ ರಲ್ಲಿ ಈತ ಮೊದಲಿಗ ಈತ 25 ವರ್ಷ ಬದುಕಿದರೂ ಆತನ ಜೀವಿತಾವಧಿಯಲ್ಲಿ ಮಾಡಿದ ಸಾಧನೆಗಳನ್ನು ನೆನಪಿಸಿಕೊಂಡಾಗ ಆಶ್ಚರ್ಯ ಮತ್ತು ರೋಮಾಂಚನವಾಗುತ್ತದೆ ಈತನ ಹೋರಾಟದ ಎಲ್ಲಾ ಮಜಲುಗಳು ಇಂದಿನ ಪೀಳಿಗೆಗೆ ಪ್ರೇರಣೆ ಆಗಬೇಕಿದೆ. ಕರಾವಳಿ ಭಾಗದಲ್ಲಿ ಇವರ ಇವರ ಜನ್ಮಜಯಂತಿ ದಿನಾಚರಣೆ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ವಿ ಸುನೀಲ್ ಕುಮಾರ್ ಮಾತನಾಡಿ ಆ ಕಾಲಘಟ್ಟದಲ್ಲಿ ಅರಣ್ಯವಾಸಿಗಳು ಕಿರು ಅರಣ್ಯ ಉತ್ಪನ್ನಗಳನ್ನು ಜೀವನಾಧಾರವಾಗಿ ಇಟ್ಟುಕೊಂಡು ಇದು ಜನ್ಮಸಿದ್ಧ ಹಕ್ಕು ಆಗಿದ್ದರು ಇದನ್ನು ಬ್ರಿಟಿಷ್ ಸರ್ಕಾರ ನಿರ್ಬಂಧಿಸಲು ಹೊರಟಾಗ ಇದರ ವಿರುದ್ಧ ಸಮಸ್ತ ಆದಿವಾಸಿಗಳನ್ನು ಒಗ್ಗೂಡಿಸಿಕೊಂಡು ಹೋರಾಟ ಮಾಡಿ ಅರಣ್ಯವಾಸಿಗಳಿಗೆ ನ್ಯಾಯ ಒದಗಿಸುವಲ್ಲಿ ಪ್ರಯತ್ನಿಸಿದ್ದು, ಈ ಕಾಲಘಟ್ಟದಲ್ಲಿ ಅರಣ್ಯ ಪ್ರದೇಶದಲ್ಲಿ ವಾಸಿಸುವವರಿಗೆ ಕಿರು ಅರಣ್ಯ ಉತ್ಪನ್ನ ಸಂಗ್ರಹಕ್ಕೆ ಅಡ್ಡಿ ಆತಂಕ ಇದ್ದು ಆಗಿನ ಬಿರ್ಸಾ ಮುಂಡ ಹೋರಾಟಗಳು ಈಗಿನ ಬುಡಕಟ್ಟು ಆದಿವಾಸಿಗಳಿಗೆ ಪ್ರೇರಣೆ ಆಗಬೇಕಿದೆ. ಈ ದೇಶದ ದೇಶದ ಸಂಸ್ಕೃತಿ, ಸಂಸ್ಕಾರಗಳು ಬುಡಕಟ್ಟುಗಳಿಂದ ಅನ್ನುವಂತದ್ದನ್ನು ಮರೆಯುವಂತಿಲ್ಲ ಇದಕ್ಕೆ ಅತ್ಯುತ್ತಮ ಉದಾಹರಣೆ ಬಿರ್ಸಾ ಮುಂಡಾ ಎಂದರು.
ಈ ಸಂದರ್ಭದಲ್ಲಿ ಕೇರಳ ರಾಜ್ಯದ ಸಹ ಪ್ರಭಾರಿಯಾಗಿ ಆಯ್ಕೆಯಾದ ಶಾಸಕ ಸುನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಮಹಾವೀರ ಹೆಗ್ಡೆ ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ ಸಾಲಿಯಾನ್ ಹಾಗೂ ನವೀನ್ ನಾಯಕ್ ಎಸ್ ಟಿ ಮೋರ್ಚಾದ ಅಧ್ಯಕ್ಷರಾದ ಕೆ ಪಿ ನಾಯ್ಕ್, ಜಿಲ್ಲಾ ಪಂಚಾಯತ್ ಸದಸ್ಯರಾದ ದಿವ್ಯ ಶ್ರೀ ಗಿರೀಶ್ ಆಮೀನ್, ರೇಶ್ಮ ಉದಯ ಶೆಟ್ಟಿ ಹಾಗೂ ಎಸ್ ಟಿ ಮೋರ್ಚಾದ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮಂಡಲದ ಎಸ್ ಟಿ ಮೋರ್ಚಾ ಉಪಾಧ್ಯಕ್ಷ ಪ್ರಶಾಂತ್ ಹೆರ್ಮುಂಡೆ ಸ್ವಾಗತಿಸಿ, ಜಿಲ್ಲಾ ಎಸ್ ಟಿ ಮೋರ್ಚಾದ ಉಪಾಧ್ಯಕ್ಷ ಶ್ರೀಧರ ಗೌಡ ಪ್ರಸ್ತಾವನೆಗೈದರು. ಮಂಡಲದ ಎಸ್ ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಎಸ್ ಟಿ ಮೋರ್ಚಾದ ಕಾರ್ಯದರ್ಶಿ ಪುತ್ರನ್ ವಂದಿಸಿದರು.
ಜಾಹೀರಾತು
Post a comment