ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಕಾರ್ಕಳ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿಂದ ಸಮನ್ಸ್ ನೀಡಲಾಗಿದೆ.
2018ರ ಚುನಾವಣಾ ಭಾಷಣದ ವೇಳೆ ಸುನೀಲ್ ಕುಮಾರ್ ಕೋಮುವಾದ ಪ್ರಚೋದಿಸುವಂತೆ ಭಾಷಣ ಮಾಡಿದ್ದರು. ಶಾಸಕರ ವಿರುದ್ಧ ಕಾರ್ಕಳ ಟೌನ್ ಪೊಲೀಸರು FIR ದಾಖಲು ಮಾಡಿದ್ದರು. ಜೊತೆಗೆ ಪ್ರಕರಣ ರದ್ದುಗೊಳಿಸಲು ಸಲ್ಲಿಸಲಾದ ಮನವಿಯನ್ನು ಹೈಕೋರ್ಟ್ ಕೂಡಾ ನಿರಾಕರಿಸಿತ್ತು. ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ನೀಡಿದ್ದು,ಡಿಸೇಂಬರ್ 10ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸುನೀಲ್ ಕುಮಾರ್ ರವರಿಗೆ ಸೂಚನೆ ನೀಡಲಾಗಿದೆ.
ಏನಿದು ವಿವಾದ? 2018ರ ವಿಧಾನಸಭಾ ಚುನಾವಣೆಯಲ್ಲಿ ಕಲ್ಲಡ್ಕದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸುನೀಲ್ ಕುಮಾರ್,ಬಂಟ್ವಾಳ ಕ್ಷೇತ್ರದಲ್ಲಿ ಈ ಭಾರಿ ಚುನಾವಣಾ ರಾಜೇಶ್ ನಾಯ್ಕ್ ಮತ್ತು ರಮಾನಾಥ್ ರೈ ನಡುವೆ ನಡೆಯುತ್ತಿಲ್ಲ ಬದಲಾಗಿ ಶ್ರೀ ರಾಮ ಮತ್ತು ಅಲ್ಲಾಹುವಿನ ನಡುವೆ ನಡೆಯುತ್ತಿದೆ,ಮತ್ತೊಮ್ಮೆ ಅಲ್ಲಾಹುನನ್ನು ಗೆಲ್ಲಿಸುತ್ತೀರೋ ರಾಮನನ್ನು ಪ್ರೀತಿಸುವ ವ್ಯಕ್ತಿಯನ್ನು ಗೆಲ್ಲಿಸುತ್ತೀರೋ ಎಂದು ನೀವೇ ನಿರ್ಧರಿಸಿ ಎಂದು ಹೇಳಿದ್ದರು.
ಜಾಹೀರಾತು
Post a comment